ಪಾಂಡವೆರ್ ಮಹಾಭಾರತೊದ ಮಹಾಕಾವ್ಯದ ಪ್ರಮುಖ ಪಾತ್ರೊಲಾಯಿನ ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಬೊಕ್ಕ ಸಹದೇವ ಪನ್ಪುನ ಐನ್ ಜನ ಸಹೋದರೆರೆನ್ ಉಲ್ಲೇಖಿಸದುಂಡು. ಅಕುಲೆನ್ ಕುರು ರಾಜೆ ಪಾಂಡುನ ಜೋಕುಲು ಪಂಡ್‌ದ್ ಪರಿಗಣಿಸವೊಂದು ಇತ್ತೆರ್‌. ಆಂಡ ಪಾಂಡುಗು ಜೋಕುಲೆನ್‍ ಪಡೆಯೆರೆ ಅಸಮರ್ಥತೆ ಇತ್ತ್‌ನೆರ್ದ್ ಆದ್ ಕುಂತಿ-ಮಾದ್ರಿಯೆರ್ ಬೇತೆ ಬೇತೆ ದೇವೆರೆರ್ದ್ ಪಾಂಡವೆರೆನ್ ಪಡೆಯೆರ್. ಪಾಂಡವೆರ್ ದ್ರೌಪದಿ ಪನ್ಪುನಾಲೆನ್ ಬುಡೆದಿಯಾದ್ ಪಟ್ಟೊಂಡೆರ್. ಪಾಂಡವೆರ್ ಅಕುಲೆನ ಸೋದರಸಂಬಂಧಿಲಾಯಿನ ಕೌರವೆರೆನ ವಿರುದ್ಧ (ದುರ್ಯೋಧನೆ ಬೊಕ್ಕ ಆಯನ ಸಹೋದರೆರ್) ಯುದ್ಧ ಮಲ್ತೆರ್. ಉಂದೆನ್ ಕುರುಕ್ಷೇತ್ರ ಯುದ್ಧ ಪಂಡ್‌ದ್ ಲೆತ್ತೆರ್. ಯುದ್ಧೊಡು ಪಾಂಡವೆರ್ ಗೆಲ್ತೆರ್ ಬೊಕ್ಕ ಕೌರವೆರ್ ಸೋತೆರ್.

ದ್ರೌಪದಿ ಬೊಕ್ಕ ಪಾಂಡವೆರ್

ಪಾಂಡವೆರೆನ್ ಕುರು ರಾಜೆ ಪಾಂಡು ಬೊಕ್ಕ ಕುಂತಿನ ಜೋಕುಲು ಪಂದ್‍ ಪರಿಗಣಿಸಬೆರ್, ಆಂಡ ಪಾಂಡುರ್ದ್ ಸ್ವಾಭಾವಿಕವಾದ್ ಜೋಕುಲೆನ ಗರ್ಭಧರಿಸಯೆರೆ ಅಸಮರ್ಥತೆ ಅದ್ ಇತ್ತ್‌ನೆರ್ದ್‍ ಬೇತೆ ಬೇತೆ ದೇವತೆಲೆರ್ದ್ ಜೋಕುಲೆನ್ ಅಕುಲು ಪಡೆಯೆರ್. ಪಾಂಡುಗು ಋಷಿ ಕೊರ್‌ನ ಶಾಪೊರ್ದು ಜೋಕುಲೆನ್‍ ಪಡೆಯೆರೆ ಸಾಧ್ಯ ಆತ್‌ಜಿ, ಆಯಿರ್ದ್‌ ಆದ್‍ ಪಾಂಡವೆರ್ ಕುಂತಿಗ್ ಋಷಿಕುಲು ಕೊರ್‌ನ ಮಂತ್ರೊನು ವರದಾನವಾದ್ ಬಳಸ್‌ದ್ ಪುಟ್ಟ್‌ನಕುಲು. ಯುಧಿಷ್ಠಿರೆ ಧರ್ಮ ಬೊಕ್ಕ ಸಾವುದ ದೇವೆರ್ ಯಮೆ, ಗಾಳಿ ಬೊಕ್ಕ ಶಕ್ತಿದ ದೇವೆರ್ ವಾಯುಭೀಮೆ, ಬೊಲ್ಪುದ ದೇವೆರ್ ಬೊಕ್ಕ ದೇವತೆಲೆನ ರಾಜೆ ಆಯಿನ ಇಂದ್ರರ್ದ್ ಅರ್ಜುನೆ, ಬೊಕ್ಕ ನಕುಲೆ ಬೊಕ್ಕ ಸಹದೇವೆರು ಅಶ್ವಿನೀ ದೇವತೆಲೆರ್ದ್ ಜನಿಸಿಯೆರ್. ಹೆಚ್ಚುವರಿಯಾದ್, ಕುಂತಿ ಕರ್ಣನ್ ತನ್ನ ಸುರುತ ಬಾಲೆ ಆದ್ ಜನ್ಮ ಕೊರಿಯಲ್, ಆಯಗ್ ಸೂರ್ಯೆದೇವೆ ಅಮ್ಮೆ ಆಯೆ. ಕುಂತಿ ವರತ್ತ ಸಿಂಧುತ್ವನ್ ಪರೀಕ್ಷೆ ಮಲ್ಪುನಗ ಮದಿಮೆಗ್‌ ದುಂಬೆ ಕರ್ಣನ್ ಗರ್ಭೊಡು ಧರಿಸಿಯಲ್ ಬೊಕ್ಕ ವಿವಾಹೊರ್ದು ದುಂಬೆ ಪುಟ್ಟ್‌ನ ಕಾರಣ ಕರ್ಣನ್ ಕೈಬುಡಿಯಲ್. ಉಂದು ಕುರುಕ್ಷೇತ್ರ ಯುದ್ಧದ ಸಮಯೊಡು ನನಲಾತ್ ಸಂಘರ್ಷೊನು ಸೃಷ್ಟಿಮಲ್ತ್ಂಡ್, ದಾಯೆ ಪಂಡ ಕರ್ಣೆ ಬೊಕ್ಕ ಪಾಂಡವೆರೆನ ವಿರುದ್ಧ ಕೌರವೆರೆ ಸೈನ್ಯೊನು ಮುನ್ನಡೆಸಾಯೆ.

ಧೃತರಾಷ್ಟ್ರನ ಆಜ್ಞೆಯಿಂದಾಗಿ, ಪಾಂಡವರನ್ನು ಗಡಿಪಾರು ಮಾಡಲಾಯಿತು. ಅವರನ್ನು ಬರಡು ಭೂಮಿಗೆ ಓಡಿಸಲಾಯಿತು, ಆದರೆ ಅವರು ಅದನ್ನು ಭವ್ಯವಾದ ಇಂದ್ರಪ್ರಸ್ಥ ನಗರವಾಗಿ ಪರಿವರ್ತಿಸಿದರು. ಹಗೆತನದ ದುರ್ಯೋಧನನು ಯುಧಿಷ್ಠಿರನನ್ನು ದಾಳ ಆಟದಲ್ಲಿ ಜೂಜು ಆಡಲು ಆಹ್ವಾನಿಸಿದನು. ಇದು ಮಹಾಕಾವ್ಯದ ಮಹತ್ವದ ತಿರುವುಗಳಲ್ಲಿ ಒಂದಾಗಿದೆ. ಯುಧಿಷ್ಠಿರನು ತನ್ನ ಜೂಜಿನ ಚಟದಿಂದಾಗಿ ತನ್ನ ಸಂಪತ್ತು, ಸಾಮ್ರಾಜ್ಯ ಮತ್ತು ಆಸ್ತಿಗಳನ್ನು ಕಳೆದುಕೊಂಡನು, ಇದು ಶಕುನಿಯು ದಾಳದ ಆಟದಲ್ಲಿ ಮೋಸ ಮಾಡಿದ್ದು ಕಾರಣವಾಯಿತು. ಆದ್ದರಿಂದ, ಪಾಂಡವರನ್ನು ಹದಿಮೂರು ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಲಾಯಿತು. ಹನ್ನೆರಡು ವರ್ಷಗಳ ವನವಾಸವನ್ನು ಕಳೆದ ನಂತರ, ಅವರು ಮತ್ಸ್ಯ ಸಾಮ್ರಾಜ್ಯದಲ್ಲಿ ಅಜ್ಞಾತ ವಾಸದಲ್ಲಿ ವಾಸಿಸುತ್ತಿದ್ದರು. ಅನಂತರ ಪಾಂಡವರು ಸೈನ್ಯವನ್ನು ಸಂಗ್ರಹಿಸಿ ಮತ್ತು ಕೌರವರನ್ನು ಎದುರಿಸಲು ಮತ್ತು ಅಂತಿಮವಾಗಿ ಸೋಲಿಸಲು ಕೃಷ್ಣನ ಮಾರ್ಗದರ್ಶನವನ್ನು ಪಡೆದರು. ಪಾಂಡವರು ಹಸ್ತಿನಾಪುರ ಮತ್ತು ಕುರು ಸಾಮ್ರಾಜ್ಯದ ರಾಜನ ಸ್ಥಾನಮಾನವನ್ನು ಮರಳಿ ಪಡೆದರು. ಆದಾಗ್ಯೂ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅವರು ಮಾಡಿದ ತ್ಯಾಗದಿಂದಾಗಿ, ಮತ್ತು ತಮ್ಮ ಅಂತಿಮ ತಪಸ್ಸನ್ನು ಬಳಿಸಿಕೊಳ್ಳುವ ಮೂಲಕ ಮತ್ತು ಅಂತಿಮವಾಗಿ ಹಿಮಾಲಯಕ್ಕೆ ನಡೆದರು.

ಪಾಂಡವರು ಮಹಾಭಾರತದಲ್ಲಿ ಕಂಡುಬರುವ ಪಾತ್ರಗಳು - ಪಾಂಡು ಹಾಗೂ ಕುಂತಿ-ಮಾದ್ರಿಯರ ಮಕ್ಕಳು.ಪಾಂಡುವಿನ ಮಕ್ಕಳಾದ್ದರಿಂದ ಪಾಂಡವರೆಂದು ಕರೆಯಲ್ಪಟ್ಟರು.ಪಾಂಡವರು ಐದು ಜನ.ಐದು ಜನಕ್ಕೂ ಒಬ್ಬಳೇ ಪತ್ನಿ ದ್ರೌಪದಿ.

ಕುಂತಿಯ ಮಕ್ಕಳು:-
ಮಾದ್ರಿಯ ಮಕ್ಕಳು:-
(ಅವಳಿಗಳು)

ಮಹಾಭಾರತದ ಕಥೆಯಂತೆ, ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ಹಸ್ತಿನಾಪುರಸಿಂಹಾಸನದ ಬಗೆಗಿನ ವಿವಾದ ಏಳುತ್ತದೆ. ಪಗಡೆಯಾಟವೊಂದರಲ್ಲಿ ಸೋತ ನಂತರ ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ.ಇದರ ನಂತರ ರಾಜ್ಯದ ತಮ್ಮ ಹಕ್ಕನ್ನು ಪಡೆಯಲು ಕುರುಕ್ಷೇತ್ರ ಯುದ್ಧ ಆರಂಭವಾಗಿ ಕೊನೆಗೆ ಕೃಷ್ಣನ ಸಹಾಯದಿಂದ ಪಾಂಡವರು ಗೆಲ್ಲುತ್ತಾರೆ.

ಬಾಲ್ಯ ಸಂಪೊಲಿಪುಲೆ

ಪಾಂಡವರು ಚಂದ್ರವಂಶದ ರಾಜ ಪಾಂಡುವಿನ ಪುತ್ರರೇ ಪಾಂಡವರೆಂದು ಪ್ರಖ್ಯಾತರು. ಇವರು ಐವರು. ಅಜಾತಶತ್ರುವೆಂದು ಹೆಸರುಗಳಿಸಿದ ಧರ್ಮರಾಜ (ಯುಧಿಷ್ಠಿರ) ಮಹಾಸಾಹಸಿಯಾದ ಭೀಮ, ಅಪ್ರತಿಮ ಬಿಲ್ಗಾರನಾದ ಅರ್ಜುನ ಈ ಮೂವರು ಅನುಕ್ರಮವಾಗಿ ಯಮಧರ್ಮ, ವಾಯುದೇವ, ದೇವೇಂದ್ರ ಈ ದೇವತೆಗಳ ವರದಿಂದ ಹಿರಿಯರಾಣಿ ಕುಂತಿಗೆ ಕುಮಾರರಾಗಿ ಜನಿಸಿದರೆ, ನಕುಲ ಮತ್ತು ದಿವ್ಯಜ್ಞಾನಿ ಸಹದೇವರು ಅಶ್ವಿನಿದೇವತೆಗಳ ಕೃಪೆಯಿಂದ ಕಿರಿಯರಾಣಿ ಮಾದ್ರಿಯ ಪುತ್ರರಾಗಿ ಹುಟ್ಟಿದರು. ತಂದೆ ಪಾಂಡುರಾಜ, ಶತಶೃಂಗ ಪರ್ವತದಲ್ಲಿ ವಿರಕ್ತ ಜೀವನ ಸಾಗಿಸುತ್ತಿದ್ದಾಗಲೇ ಇವರು ಶುಕ್ರಮುನಿಯ ಶಿಷ್ಯರಾಗಿ ಧನುರ್ವಿದ್ಯೆಯ ಅಧ್ಯಯನ ನಡೆಸಿದರು. ತಂದೆ ಮರಣ ಹೊಂದಿದ ಮೇಲೆ ಹಸ್ತಿನಾಪುರಕ್ಕೆ ಬಂದು ಭೀಷ್ಮಾಚಾರ್ಯರ ಆಳ್ವಿಕೆಗೆ ಒಳಗಾಗಿ, ದ್ರೋಣಾಚಾರ್ಯರಲ್ಲಿ ಅಸ್ತ್ರವಿದ್ಯೆಯ ವ್ಯಾಸಂಗ ನಡೆಸಿ ಪಾರಂಗತರಾದರು.

ಯೌವನ ಸಂಪೊಲಿಪುಲೆ

ಪಾಂಡವರ ತಂದೆ ಪಾಂಡು ವಿಚಿತ್ರವೀರ್ಯನ ಹಿರಿಯ ಮಗನಲ್ಲ. ಆತನಿಗೂ ಹಿರಿಯನಾಗಿದ್ದ ಧೃತರಾಷ್ಟ್ರ ಹುಟ್ಟು ಕುರುಡನಾಗಿದ್ದರಿಂದ, ಆತನಿಗೆ ಸಿಕ್ಕಬೇಕಿದ್ದ ರಾಜ್ಯಾಧಿಕಾರ ಪಾಂಡುವಿಗೆ ದಕ್ಕಿತು. ಆದರೆ ಕುರುವಿನ ಹಿರಿಯ ವಂಶ ಶಾಖೆಯಲ್ಲಿ ಕೌರವನೆನಿಸಿದ ಧೃತರಾಷ್ಟ್ರನ ದುರ್ಯೋಧನಾದಿ ನೂರುಜನ ಮಕ್ಕಳಲ್ಲಿ ದಾಯಾದಿತನದ ದ್ವೇಷ-ಮಾತ್ಸರ್ಯಗಳು ಕಿಡಿಗೊಂಡವು. ಪಾಂಡವರ ಅಸೀಮ ಶಕ್ತಿ-ಸಾಹಸಗಳನ್ನು ಕಂಡು ಧೃತರಾಷ್ಟ್ರನಿಗೂ ಹೆದರಿಕೆ ಉಂಟಾಯಿತು. ಪರಿಣಾಮವಾಗಿ ಧೃತರಾಷ್ಟ್ರ ರಾಜ್ಯವನ್ನು ಎರಡಾಗಿ ವಿಭಜಿಸಿ ತನ್ನ ಮಕ್ಕಳನ್ನು ಹಸ್ತಿನಾವತಿಯಲ್ಲಿಯೇ ಇರಿಸಿಕೊಂಡು ಪಾಂಡವರನ್ನು ವಾರಾಣಾವತಕ್ಕೆ ಕಳುಹಿಸಿದ. ಪಾಂಡವರ ಹಿರಿಯಣ್ಣ ಧರ್ಮರಾಜ ಇಂದ್ರಪ್ರಸ್ಥವನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡು, ತನ್ನ ಶಾಸನವನ್ನು ಮುಂದುವರಿಸಿ, ಸಂಪದಭಿವೃದ್ಧಿಯನ್ನು ಸಾದಿಸಿದ. ಇದನ್ನು ಕಂಡು ಕರುಬಿದ ದುರ್ಯೋಧನ ಇವರನ್ನು ನಾಶಪಡಿಸಲು ಅನೇಕ ಹೊಂಚು-ಸಂಚುಗಳನ್ನು ಮಾಡಿದನಾದರೂ ಪಾಂಡವರೂ ತಮ್ಮ ಶಕ್ತಿ ಸಾಹಸಗಳಿಂದಲೂ ದೈವೀಕೃಪೆಯಿಂದಲೂ ಅವುಗಳಿಂದ ಪಾರಾಗುತ್ತಲೇ ಹೋದರು.

ವನವಾಸ ಸಂಪೊಲಿಪುಲೆ

ಈ ಮಧ್ಯೆ ಧರ್ಮರಾಜ ರಾಜಸೂಯ ಯಜ್ಞ ಮಾಡಲನುವಾದ. ಆ ಸಂದರ್ಭದಲ್ಲಿ ಕೃಷ್ಣನಿಗೆ ಸಂದ ಪ್ರಮುಖರೂಪದ ಮಹಾಮನ್ನಣೆಯನ್ನು ನೋಡಿ ದುರ್ಯೋಧನನಿಗೆ ಸಹಿಸಲಾಗಲಿಲ್ಲ. ಪಾಂಡವರ ಸಭೆಯನ್ನು ಕಂಡ ಮೇಲಂತೂ ಆತನ ದ್ವೇಷಾಸೂಯೆ ಇನ್ನೂ ಹೆಚ್ಚು ಉಲ್ಬಣಿಸಿತು. ಕೇಡಾಳಿತನ ಮಸೆದಿತು. ಹೇಗಾದರೂ ಸರಿಯೇ ಪಾಂಡವರನ್ನು ಮುಗಿಸಿಯೇ ಬಿಡಬೇಕೆಂದು ಆತ ಮನಸ್ಸುಮಾಡಿದ. ತನ್ನ ಮಾವ ಶಕುನಿಯ ಸಲಹೆಯಂತೆ ದ್ಯೂತದಲ್ಲಿ ಧರ್ಮರಾಜನನ್ನು ಎರಡು ಬಾರಿ ಸೋಲಿಸಿದ. ಮೊದಲ ಸೋಲಿನ ಪರಿಣಾಮವಾಗಿ ಪಾಂಡವರ ಪತ್ನಿ ದ್ರೌಪದಿ ದುರ್ಯೋಧನನ ರಾಜಸಭೆಯಲ್ಲಿ ಅನ್ಯಾಯದ ಅಪಮಾನಕ್ಕೀಡಾದಳು. ಅದನ್ನು ಕಂಡು ಕ್ರುದ್ಧನಾದ ಭೀಮ ದುರ್ಯೋಧನನ ತೊಡೆಮುರಿವ, ದುಶ್ಯಾಸನನ ನೆತ್ತರು ಕುಡಿಯುವ ಭೀಕರ ಪ್ರತಿಜ್ಞೆ ಮಾಡಿ ಮುಂಬರುವ ಮಹಾಭಾರತದ ಮಾರಣಹೋಮಕ್ಕೆ ನಾಂದಿ ಹಾಡಿದ. ಜೂಜಾಟದಲ್ಲಿಯ ಎರಡನೆಯ ಸೋಲಿನ ಫಲಸ್ವರೂಪವಾಗಿ ಪಾಂಡವರು ಪತ್ನಿ ದ್ರೌಪದಿಯೊಂದಿಗೆ ಹನ್ನೆರಡು ವರ್ಷ ವನವಾಸ ಅನುಭವಿಸಿದ ಮೇಲೆ, ಒಂದು ವರ್ಷ ಅಜ್ಞಾತವಾಸವನ್ನೂ ವಿರಾಟನ ರಾಜಧಾನಿಯಲ್ಲಿ ಕಳೆದರು. ಆಗ ಧರ್ಮರಾಜ ಕಂಕಭಟ್ಟನಾದರೆ, ಭೀಮ ಬಾಣಸಿಗ, ವಲಲನಾದ ಅರ್ಜುನ ಬೃಹನ್ನಳೆಯಾಗಿ ನೃತ್ಯ ಶಿಕ್ಷಕನಾದರೆ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟಪತ್ನಿಯ ಸೇವೆಯಲ್ಲಿ ನಿಂತಳು.

ಮಹಾ ಭಾರತ ಕದನ ಸಂಪೊಲಿಪುಲೆ

ಹೀಗೆ ವಚನ ಪರಿಪಾಲನೆಗಾಗಿ ಪಾಂಡವರು ಅಜ್ಞಾತವಾಸದ ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾಗಿ, ತಮ್ಮ ರಾಜ್ಯವನ್ನು ತಮಗೆ ಹಿಂದಿರುಗಿಸಬೇಕೆಂದು ದುರ್ಯೋಧನನಿಗೆ ಹೇಳಿಕಳಿಸಿದರು. ಆದರೆ ದುರ್ಯೋಧನ ಯುದ್ಧವಿಲ್ಲದೆಯೆ ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡೆನೆಂದು ಉತ್ತರಿಸಿದ. ಇದರ ಫಲವಾಗಿ ಭೀಕರವಾದ ಮಹಾಭಾರತಸಮರ ಹದಿನೆಂಟು ದಿನಗಳ ಕಾಲ ಕುರುಕ್ಷೇತ್ರದಲ್ಲಿ ನಡೆಯಿತು. ಸಮಕಾಲೀನ ಭರತವರ್ಷದ ಅರಸರೆಲ್ಲರೂ ಬಹುಶಃ ಆ ಯುದ್ಧದಲ್ಲಿ ಒಂದಿಲ್ಲೊಂದು ಪಕ್ಷದ ಪರವಾಗಿ ಪಾಲ್ಗೊಂಡಿದ್ದರು. ಅದರಲ್ಲಿ ಕೌರವರೆಲ್ಲ ಸತ್ತು, ಪಾಂಡವರು ಗೆದ್ದರು. ಆಮೇಲೆ ಪಾಂಡವರ ಹಿರಿಯಣ್ಣ ಧರ್ಮರಾಜ ಹಸ್ತಿನಾವತಿಯ ಗದ್ದುಗೆ ಏರಿ ಅಶ್ವಮೇಧ ಯಾಗಮಾಡಿ ಮೂವತ್ತಾರು ವರ್ಷ ರಾಜ್ಯಭಾರ ನಡೆಸಿದ. ಕೊನೆಗೆ ರಾಜ್ಯಾಧಿಕಾರವನ್ನು ಮೊಮ್ಮಗನಾದ ಪರೀಕ್ಷಿತನಿಗೆ ಒಪ್ಪಿಸಿ, ತಮ್ಮಂದಿರೊಡನೆ ಮಹಾಪ್ರಸ್ಥಾನ ಕೈಗೊಂಡು, ಸ್ವರ್ಗಕ್ಕೆ ಹೋದ.


ಉಲ್ಲೇಕೊ ಸಂಪೊಲಿಪುಲೆ

ಟೆಂಪ್ಲೇಟ್:Includes Wikisource